
ರೇಣುಕಾ ಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಷ್, ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಬದಲಾಗಿದ್ದಾರೆ.
ಪ್ರದೋಷ್ ಹೇಳಿಕೆ ದಾಖಲಿಸದಂತೆ ತಡೆಯಲು ದರ್ಶನ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ಕಾರಣದಿಂದ ಇಂದು ಹೇಳಿಕೆ ದಾಖಲಿಸಲಿಲ್ಲ.
ನ್ಯಾಯಾಲಯಕ್ಕೆ ಕರೆತಂದಾಗ ಮಾಧ್ಯಮಗಳ ಕ್ಯಾಮೆರಾ ಕಂಡ ಪ್ರದೋಷ್, ಥಮ್ಸ್ ಅಪ್ ಸನ್ನೆ ಮಾಡುವ ಮೂಲಕ ಗೆಲುವು ತನ್ನದೇ ಎಂಬರ್ಥದಲ್ಲಿ ಪ್ರತಿಕ್ರಿಯಿಸಿದ್ದಾರೆ.