
ಧಾರವಾಡ-ಬೆಳಗಾವಿ ಕೈಗಾರಿಕಾ ಕಾರಿಡಾರ್ಗಾಗಿ ಸರ್ಕಾರ 6,000 ಎಕರೆ ಭೂಸ್ವಾಧೀನಕ್ಕೆ ಮುಂದಾಗಿದ್ದು, ಈಗಾಗಲೇ 3,500 ಎಕರೆ ಸ್ವಾಧೀನಪಡಿಸಿಕೊಳ್ಳಲಾಗಿದೆ.
ಹೊಲಗಳಲ್ಲಿಯೇ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ನೂರಾರು ರೈತ ಕುಟುಂಬಗಳು, ಭೂಸ್ವಾಧೀನದಿಂದಾಗಿ ಮನೆ ಮತ್ತು ಕೃಷಿ ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿವೆ.
ಕಾರ್ಖಾನೆಗಳ ಮಾಲಿನ್ಯ ಮತ್ತು ಕೃಷಿ ಭೂಮಿ ಇಲ್ಲದ ಬದುಕು ಹೇಗೆ ಎಂಬ ಆತಂಕದಲ್ಲಿರುವ ರೈತರು, ಸರ್ಕಾರ ಸೂಕ್ತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.