
ಉಡುಪಿ ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಹಂತಕರನ್ನು ಪೊಲೀಸರು ಬೈಂದೂರು, ಭಟ್ಕಳ ಮತ್ತು ಕುಮುಟಾದಲ್ಲಿ ಬಂಧಿಸಿದ್ದಾರೆ.
ಎ1 ಆರೋಪಿ ರಾಜುವಿನ ಮೇಲೆ 5 ರಾಜ್ಯಗಳಲ್ಲಿ 26 ಪ್ರಕರಣಗಳಿದ್ದು, ಈತ 9 ಎಮ್ಎಮ್ ಪಿಸ್ತೂಲಿನಿಂದ ಗುಂಡು ಹಾರಿಸಿ 2 ರಿಂದ 3 ಕೋಟಿ ರೂಪಾಯಿ ಆರ್ಥಿಕ ವೈಮನಸ್ಸಿನ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾನೆ.
ಆರೋಪಿ ರಾಜುವಿನ ಖಾತೆಗೆ 2 ಲಕ್ಷಕ್ಕೂ ಹೆಚ್ಚು ಹಣ ಪಾವತಿಯಾಗಿದ್ದು, ತನಿಖೆಗಾಗಿ ವಿಶೇಷ ತಂಡವನ್ನು ಹೊರ ರಾಜ್ಯಕ್ಕೆ ಕಳುಹಿಸಲಾಗಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.